ರಾಮಲಿಂಗೇಶ್ವರ ಮಹಾಸ್ವಾಮಿಗಳ ಮುಳ್ಳುಗದ್ದುಗೆ, ಅಡ್ಡ ಪಲ್ಲಕ್ಕಿ ಉತ್ಸವ

ಚನ್ನಗಿರಿ ತಾಲ್ಲೂಕಿನ ತ್ಯಾವಣಿಗೆ ಸಮೀಪದ ಹರನಹಳ್ಳಿ – ಕೆಂಗಾಪುರ ಶ್ರೀ ರಾಮಲಿಂಗೇಶ್ವರ ಮಠದಲ್ಲಿ ಇಂದಿನಿಂದ ಇದೇ ದಿನಾಂಕ  10 ರವರೆಗೆ ವಿವಿಧ ಧಾರ್ಮಿಕ  ಕಾರ್ಯಕ್ರಮಗಳು ಜರುಗಲಿವೆ.

ಇಂದು ಬೆಳಗ್ಗೆ 8 ಗಂಟೆಗೆ ಬ್ರಹ್ಮ ಮಾಲೆ ಗುರು ದೀಕ್ಷೆ, ಸಂಜೆ 5 ಗಂಟೆಗೆ ನಾಗ ಗುಗ್ಗಳ ಕಾರ್ಯಕ್ರಮ, ಅಥಣಿ ತಾಲ್ಲೂಕಿನ ಶ್ರೀ ರಾಮಲಿಂಗೇಶ್ವರ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ಹಾಗೂ ಶ್ರೀ ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 

ನಾಳೆ ಶನಿವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಸಮರ್ಥ ಸದ್ಗುರು ಶ್ರೀ ರಾಮಲಿಂಗೇಶ್ವರ ಮಹಾಸ್ವಾಮಿಗಳ 48 ನೇ ವರ್ಷದ ಮುಳ್ಳು ಗದ್ದಿಗೆ ಉತ್ಸವ, ಉಚಿತ ಸಾಮೂಹಿಕ ವಿವಾಹ, ಜವಳ, ಸಂಜೆ 7 ಗಂಟೆಗೆ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ  ನೆರವೇರಲಿವೆ. ಅಂದಿನ ಕಾರ್ಯಕ್ರಮವನ್ನು ಮಾಜಿ ಲೋಕಸಭಾ ಸದಸ್ಯ ವಿ. ಎಸ್. ಉಗ್ರಪ್ಪ ಉದ್ಘಾಟಿಸುವರು. 

ದಿನಾಂಕ 10 ರ ಭಾನುವಾರ ಬೆಳಿಗ್ಗೆ 8 ಗಂಟೆಗೆ ಶ್ರೀಗಳ ಆಶೀರ್ವಚನ, 9 ಗಂಟೆಗೆ ಅಮಾವಾಸ್ಯೆ ಪ್ರಯುಕ್ತ ಅಗ್ನಿಹೋಮ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 9606297544 ಅಥವಾ 9845409510.

error: Content is protected !!