ನಗರದಲ್ಲಿಂದು `ಕಾನೂನು ಅರಿವು-ನೆರವು’ ಬೀದಿ ನಾಟಕ ಪ್ರದರ್ಶನ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರ್.ಎಲ್. ಲಾ ಕಾಲೇಜು   ಇವರ ಸಹಯೋಗದಲ್ಲಿ ಇಂದು ಸಂಜೆ 4.30 ಕ್ಕೆ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಆರ್.ಎಲ್. ಲಾ ಕಾಲೇಜಿನ ಐದನೇ ವರ್ಷ ಹಾಗೂ ಏಳನೇ ಸೆಮಿಸ್ಟರ್ ವಿದ್ಯಾರ್ಥಿಗ ಳಿಂದ `ಕಾನೂನು ಅರಿವು-ನೆರವು’ ಬೀದಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಹಿರಿಯ ನ್ಯಾಯಾಧೀಶರಾದ ಮಹಾವೀರ ಎಂ. ಕರೆಣ್ಣನವರ್ ಕಾರ್ಯಕ್ರಮ ಉದ್ಘಾಟಿಸುವರು. ಕಾಲೇಜಿನ ಪ್ರಾಚಾರ್ಯ ಡಾ. ಜಿ.ಎಸ್. ಸತೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಎಂ.ಜಿ. ಈಶ್ವರಪ್ಪ, ದಿನೇಶ್ ಕೆ. ಶೆಟ್ಟಿ ಭಾಗವಹಿಸಲಿದ್ದಾರೆ. 

error: Content is protected !!