ನಗರದಲ್ಲಿ ಇಂದು ಕೊಟ್ಟೂರು ಪಾದಯಾತ್ರೆಗಳಿಗೆ ಬೀಳ್ಕೊಡುಗೆ

ನಗರದಲ್ಲಿ ಇಂದು ಕೊಟ್ಟೂರು ಪಾದಯಾತ್ರೆಗಳಿಗೆ ಬೀಳ್ಕೊಡುಗೆ

ಇದೇ ದಿನಾಂಕ 4 ರಂದು ನಡೆಯುವ ಕೊಟ್ಟೂರು ಶ್ರೀ ಗುರು ಬಸವೇಶ್ವರ ರಥೋತ್ಸವಕ್ಕೆ ತೆರಳುವ ಪಾದಯಾತ್ರಿಗಳಿಗೆ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ ವತಿಯಿಂದ  ಇಂದು ಸಂಜೆ 6 ಕ್ಕೆ ನಗರದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಕೈಗಾರಿಕೋದ್ಯಮಿಯೂ ಆದ ಟ್ರಸ್ಟ್‌ ಗೌರ ವಾಧ್ಯಕ್ಷ ಅಥಣಿ ಎಸ್. ವೀರಣ್ಣ ತಿಳಿಸಿದ್ದಾರೆ.

ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ, ಕೂಡ್ಲಿಗೆ ಅಯ್ಯನಹಳ್ಳಿ ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಕೊಟ್ಟೂರು ಮಹಲ್ ಮಠದ ಶ್ರೀ ಶಂಕರ ಸ್ವಾಮೀಜಿ, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.

ನಾಳೆ ಶನಿವಾರ ಸಂಜೆ ಅರಸೀಕೆರೆ ಶ್ರೀ ಗುರು ಕೋಲಶಾಂತೇಶ್ವರ ವಿರಕ್ತಮಠದಲ್ಲಿ 26ನೇ ವರ್ಷದ ಔಷಧೋಪಚಾರ  ಸೇವೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.

error: Content is protected !!