ಕುರುಬ ಸಮಾಜದ ಹಿರಿಯ ಮುಖಂಡರೂ, ಶ್ರೀ ಬೀರೇಶ್ವರ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿಗಳೂ, ಶ್ರೀ ಬೀರೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದ ರ್ಶಿಗಳೂ, ನಗರ ದೇವತೆ ದುಗ್ಗಮ್ಮ ದೇವಸ್ಥಾನದ ಧರ್ಮದರ್ಶಿಗಳೂ ಆದ ಜೆ.ಕೆ.ಕೊಟ್ರಬಸಪ್ಪ ಅವರ ನಿಧನಕ್ಕೆ ಇಂದು ಬೆಳಿಗ್ಗೆ 10.30 ಕ್ಕೆ ಶ್ರೀ ಬೀರೇಶ್ವರ ದೇವಸ್ಥಾನದ ಆವರಣ ದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಬಿ.ಹೆಚ್.ಪರುಶುರಾಮಪ್ಪ ಇವರ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಸಭೆ ಕರೆಯಲಾಗಿದೆ.
ಸಮಾಜದ ಮುಖಂಡರು ಹಾಗೂ ಸಮಾಜದ ಎಲ್ಲಾ ಘಟಕ ಗಳ ಪದಾಧಿಕಾರಿಗಳು ಶ್ರದ್ಧಾಂ ಜಲಿ ಸಭೆ ಯಲ್ಲಿ ಭಾಗವಹಿಸಲು ಜಿಲ್ಲಾ ಕುರು ಬರ ಸಂಘದ ಪ್ರಧಾನ ಕಾರ್ಯ ದರ್ಶಿಯೂ ಆದ ವಕೀಲ ಲೋಕಿಕೆರೆ ಸಿದ್ದಪ್ಪ ಅವರು ಕೋರಿದ್ದಾರೆ.