ದಾವಣಗೆರೆ, ಫೆ. 23- ಇಲ್ಲಿಗೆ ಸಮೀಪದ ಹೆಬ್ಬಾಳು ಗ್ರಾಮದ ಶ್ರೀ ಮಹಾಂತ ರುದ್ರೇಶ್ವರ ವಿರಕ್ತ ಮಠದಲ್ಲಿ ಇದೇ ದಿನಾಂಕ 27ರ ಮಂಗಳವಾರ ನಡೆಯಲುದ್ದೇಶಿಸಿದ್ದ ಹತ್ತನೇ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದು, ಸದರಿ ಸಮ್ಮೇಳನವನ್ನು ಬರುವ ಮಾರ್ಚ್ 5ರ ಮಂಗಳವಾರ ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮದ ಶ್ರೀ ಮಹಾಂತ ರುದ್ರೇಶ್ವರ ವಿರಕ್ತ ಮಠದಲ್ಲಿ ನಡೆಸಲಾಗುವುದು ಎಂದು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ತಿಳಿಸಿದ್ದಾರೆ.
August 27, 2024