ಸಂತ ಸೇವಾಲಾಲ್ ಜಯಂತಿ ವೇಳೆ ಹಲ್ಲೆ: ಕ್ಷಮೆಗೆ ಆಗ್ರಹ

ದಾವಣಗೆರೆ, ಫೆ.20- ಸೂರಗೊಂಡನಕೊಪ್ಪದಲ್ಲಿ ಇತ್ತೀಚೆಗೆ ನಡೆದ ಸಂತ ಸೇವಾಲಾಲ್ ಜಯಂತಿ ಆಚರಣೆ ವೇಳೆ ಪೂಜೆ ಮಾಡುತ್ತಿದ್ದ ತಮ್ಮ ಮೇಲೆ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ಹಾಗೂ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಹಲ್ಲೆ ಮಾಡಿದ್ದು, ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಸಂತ ಬಾಲಕೃಷ್ಣ ಮಹಾರಾಜ್ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಬಂಜಾರ ಸಮುದಾಯದ ಪ್ರಮುಖರಾದ ಪುರುಷೋತ್ತಮ್ ನಾಯ್ಕ, ಪ್ರಕಾಶ್ ನಾಯ್ಕ, ಅನಂತನಾಯ್ಕ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!