ನಗರದಲ್ಲಿ ಇಂದು ಆರೋಗ್ಯ ಶಿಬಿರ

ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ಸಂಚಾರಿ ಆರೋಗ್ಯ ವಾಹನದಲ್ಲಿ 30 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.30 ರವರೆಗೆ ರಾಮನಗರದ ಕಾಳಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.  

ಉಚಿತ ಬಿ.ಪಿ ತಪಾಸಣೆ, ರಕ್ತದ ಸಕ್ಕರೆ ತಪಾಸಣೆ, ಇ.ಸಿ.ಜಿ ಪರೀಕ್ಷೆ, ನೇತ್ರ ತಪಾಸಣೆ, ಹೃದಯ ತಪಾಸಣೆ ಹಾಗು ನುರಿತ ವೈದ್ಯರಿಂದ ಸಂಪೂರ್ಣ ಆರೋಗ್ಯ ತಪಾಸಣೆ ಹಾಗು ಸಮಾಲೋಚನೆ ಮಾಡಲಾಗುವುದು.  

error: Content is protected !!