ಮುತ್ತಿಗಿ ಗ್ರಾಮದಲ್ಲಿ ಇಂದು ಹಾಲಸ್ವಾಮಿ ಜಾತ್ರಾ ಮಹೋತ್ಸವ

ಹರಪನಹಳ್ಳಿ ತಾಲ್ಲೂಕಿನ ಮುತ್ತಿಗಿ ಗ್ರಾಮದಲ್ಲಿ ಶ್ರೀ ಗುರು ಹಾಲಸ್ವಾಮಿ  ಜಾತ್ರಾ ಮಹೋತ್ಸವವು ಇಂದು ಮತ್ತು ನಾಳೆ ಜರುಗಲಿದೆ.

 ಇಂದು ರಾತ್ರಿ 10.30.ಕ್ಕೆ  ಶ್ರೀ ಸದ್ಗುರು ಶಿವಯೋಗಿ ಅಜ್ಜಯ್ಯ ಹಾಲಸ್ವಾಮೀಜಿ ದಿವ್ಯ ಸಾನ್ನಿದ್ಯದಲ್ಲಿ ಮುಳ್ಳುಗದ್ದಿಗೆ ಕಾರ್ಯಕ್ರಮ ಜರುಗಲಿದೆ.

ನಾಳೆ ಮಂಗಳವಾರ ಬೆಳಿಗ್ಗೆ 4 ಗಂಟೆಗೆ  ರುದ್ರಾಭಿಷೇಕ ಜಂಗಮ ವಟುಗಳಿಗೆ  ಶಿವದೀಕ್ಷೆ  ಕಾರ್ಯಕ್ರಮ. ಬೆಳಿಗ್ಗೆ 11.30.ಕ್ಕೆ  ಸಾಮೂಹಿಕ ವಿವಾಹಗಳು  ಹಾಗೂ ಶ್ರೀ ಗುರು ಹಾಲಸ್ವಾಮಿಯ ಮಹಾ ರಥೋತ್ಸವ ಮತ್ತು ಧರ್ಮಸಭೆ ಜರುಗಲಿದೆ.

  ರಾಮಘಟ್ಟದ  ಪುರವರ್ಗ ಮಠದ ಷ. ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳದ ಪುರವರ್ಗ ಹಿರೇಮಠದ ಷ. ಬ್ರ. ಓಂಕಾರ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ  ಡಾ. ಮಹೇಶ್ವರ ಸ್ವಾಮೀಜಿ, ಬೆಣ್ಣಿಹಳ್ಳಿ ಹಿರೇಮಠದ ಶ್ರೀ ಪಂಚಾಕ್ಷರ ಶಿವಾಚಾರ್ಯ  ಸ್ವಾಮೀಜಿ, ಕೊಟ್ಟೂರು ಚಾನುಕೋಟಿಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಅವರು ಧರ್ಮ ಸಭೆಯ ದಿವ್ಯ ಸಾನ್ನಿದ್ಯ ವಹಿಸಲಿದ್ದಾರೆ.

 ಮುಸ್ಟೂರು ಓಂಕಾರೇಶ್ವರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ. ಹರಪನಹಳ್ಳಿ ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಲಿದ್ದಾರೆ.  ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್  ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

error: Content is protected !!