ಲೇಬರ್ ಕಾಲೋನಿಯಲ್ಲಿ ಇಂದು ಶ್ರೀ ಕರಿಬಸವೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನೆ

ಲೇಬರ್ ಕಾಲೋನಿ, ಕೆಎಸ್ಸಾರ್ಟಿಸಿ ಬಸ್ ಸ್ಟ್ಯಾಂಡ್ ರಸ್ತೆ, 6ನೇ ಕ್ರಾಸ್‌ನಲ್ಲಿ   ನಿರ್ಮಿಸಲಾಗಿರುವ ಶ್ರೀಗುರು ಕರಿಬಸವೇಶ್ವರ ಸ್ವಾಮಿ ನವ ದೇವಸ್ಥಾನದ ಉದ್ಘಾಟನೆ ಮತ್ತು ವಿಗ್ರಹದ ಮರು ಪ್ರತಿಷ್ಠಾಪನೆ ಪೂಜಾ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ. ಲಿಂಗದಹಳ್ಳಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು  ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ದೇವಸ್ಥಾನವನ್ನು 1965ರಲ್ಲಿ ಸ್ಥಾಪಿಸಿ ಸೇವಾ ಕಾರ್ಯವನ್ನು ನಾಗಪ್ಪಜ್ಜ ಪಾಳ್ಯ ಇವರ ಪುತ್ರ ಪಿ.ಎನ್.ಲೋಕೇಶಪ್ಪ, ಶ್ರೀಮತಿ ನಾಗಮ್ಮ  ಮತ್ತು ಬಂಧುಗಳು ನೆರವೇರಿಸಿಕೊಂಡು ಬರುತ್ತಿದ್ದಾರೆ.

ಈ ಕಾರ್ಯಕ್ರಮಕ್ಕೆ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ,  ಜಿಲ್ಲಾ  ಉಸ್ತುವಾರಿ  ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದ ಜಿ.ಎಂ.ಸಿದ್ದೇಶ್ವರ, ಸಿವಿಲ್ ಎಂಜಿನಿಯರ್ ಎಸ್.ರಾಜು ಸಾರಥಿ, ಮಹಾನಗರ ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಹುಲ್ಲುಮನಿ ಗಣೇಶ್ ಮತ್ತಿತರರು ಆಗಮಿಸಲಿದ್ದಾರೆ.

error: Content is protected !!