ಬಿಜೆಪಿ ನವೀಕೃತ ಕಾರ್ಯಾಲಯದಲ್ಲಿ ವಿಶೇಷ ಪೂಜೆ

ದಾವಣಗೆರೆ ಫೆ. 15- ಬಿಜೆಪಿ ನೂತನ ಜಿಲ್ಲಾಧ್ಯಕ್ಷ  ಎನ್. ರಾಜಶೇಖರ ನಾಗಪ್ಪ ಅವರು ನಗರದ ಬಿಜೆಪಿ ನವೀಕೃತ ಕಾರ್ಯಾಲಯದಲ್ಲಿ ಗಣಪತಿ, ಲಕ್ಷ್ಮಿ ಪೂಜೆ ನೆರವೇರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಲ್ ಕುಮಾರ್ ನಾಯ್ಕ, ಐರಣಿ ಅಣ್ಣೇಶ್ ಉಪಸ್ಥಿತರಿದ್ದು ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಉಪ ಮಹಾಪೌರರಾದ ಯಶೋಧ ಯಗ್ಗಪ್ಪ,
ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಾ ವಾಲಿ, ಭಾಗ್ಯ ಪಿಸಾಳೆ, ರೇಖಾ ಸುರೇಶ್, ನೀತು, ಗೌರಮ್ಮ, ದಾಕ್ಷಾಯಿಣಿ, ಸರ್ವಮಂಗಳ, ಭಾಗ್ಯಮ್ಮ ಸೇರಿದಂತೆ  ಇತರರು ಭಾಗವಹಿಸಿದ್ದರು. 

error: Content is protected !!