ಚನ್ನಗಿರಿ : ಸಂವಿಧಾನ ಜಾಗೃತಿ ಜಾಥಾ

ಸಂವಿಧಾನದ ಆಶಯವನ್ನು ಜನಸಾಮಾನ್ಯರಿಗೆ ತಿಳಿಸಿಕೊಡಲು ಸಂವಿಧಾನ  ಜಾಗೃತಿ ಜಾಥಾ ಜಿಲ್ಲೆಯಾದ್ಯಂತ ನಡೆಯುತ್ತಿದ್ದು,ಇಂದಿನಿಂದ ಇದೇ ದಿನಾಂಕ 17 ರವರೆಗೆ ಚನ್ನಗಿರಿ ಮತ್ತು ದಾವಣಗೆರೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳಗಳಲ್ಲಿ ಸಂಚರಿಸಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ತಿಳಿಸಿದ್ದಾರೆ.

ಜಾಥಾವು ಇಂದು ಚನ್ನಗಿರಿ ತಾಲ್ಲೂಕಿನ  ಮಲ್ಲಾಪುರ, ಕೋಗಲೂರು, ಬೆಳ್ಳಿಗನೂಡು, ಸಂತೇಬೆನ್ನೂರು, ದೊಡ್ಡಬ್ಬಿಗೆರೆ, ಸಿದ್ದನಮಠ, ಮೆದಿಕೆರೆ, ತಣಿಗೆರೆ, ಗ್ರಾಮಗಳಲ್ಲಿ ಸಂಚರಿಸಲಿದೆ.

ನಾಳೆ ಶನಿವಾರ ತಣಿಗೆರೆ, ಕಂದಗಲ್ಲು, ಮಳಲಕೆರೆ, ಬಾಡಾ, ಅಣಬೇರು,  ಹುಚ್ಚವ್ವನಹಳ್ಳಿ, ಮಾಯಕೊಂಡ ಗ್ರಾಮದಿಂದ ಮುಂದಿನ ಗ್ರಾಮಗಳಿಗೆ ಸಂಚರಿಸಲಿದೆ.  

error: Content is protected !!