ಪಿ.ಬಿ.ರಸ್ತೆಯ ಕರೂರ್ ಕ್ರಾಸ್ ಹತ್ತಿರ, ಪಂಚ ದೇವಸ್ಥಾನಗಳ ಮಹಾಕ್ಷೇತ್ರದಲ್ಲಿ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಇಂದು ಮತ್ತು ನಾಳೆ ಬೆಳಿಗ್ಗೆ ಪಂಚದೇವರುಗಳಿಗೆ ಹಾಗೂ ಕಾಶಿ ಮಹಾಲಿಂಗೇಶ್ವರಗೆ ಪಂಚಾಮೃತ ಹಾಗೂ ತೈಲಾಭಿಷೇಕವಿರುತ್ತದೆ.
ಇಂದು ಬೆಳಿಗ್ಗೆ 9. ಗಂಟೆಗೆ ಗಣಹೋಮ, ರುದ್ರಹೋಮ ಹಾಗೂ ರುದ್ರ ಪಠಣವಿರುತ್ತದೆ. ನಾಳೆ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಚಂಡಿ ಹೋಮ ನಂತರ 25 ಮುತ್ತೈದೆಯವರಿಗೆ ಬಾಗಿನ ಅರ್ಪಣೆ ಹಾಗೂ ಗಾನ ಸೌರಭ ಸಂಗೀತ ವಿದ್ಯಾಲಯದಿಂದ ವೀಣಾ ವಾದನ ಕಾರ್ಯಕ್ರಮವಿರುತ್ತದೆ.