ನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದು ಶ್ರೀ ಗಿರಿಜಾ ಶಂಕರ ಕಲ್ಯಾಣೋತ್ಸವ

ನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದು ಶ್ರೀ ಗಿರಿಜಾ ಶಂಕರ ಕಲ್ಯಾಣೋತ್ಸವ

ಡಿ. ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಮಾತಾ ಅನ್ನಪೂರ್ಣೆಶ್ವರಿ ದೇವಸ್ಥಾನದ 26 ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವು ನಡೆಯುತ್ತಿದ್ದು, ಇಂದು ಮತ್ತು ನಾಳೆ ವಿಶೇಷ ಪೂಜೆಗಳು ಜರುಗಲಿವೆ.  

ಇಂದು ಬೆಳಿಗ್ಗೆ 8 ಗಂಟೆಗೆ ಪಂಚಾಮೃತ ಅಭಿಷೇಕ, ಮಂಡಲ ಆರಾಧನೆ, ರುದ್ರಹೋಮ, ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 5 ಕ್ಕೆ ಶ್ರೀ ಗಿರಿಜಾ ಶಂಕರ ಕಲ್ಯಾಣ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನ ಪುರೋಹಿತರಾದ ಜಿ. ಪ್ರವೀಣ್ ಅವರಿಂದ ನಡೆಯಲಿದೆ. ಇದಲ್ಲದೇ ಪ್ರತಿ ಶನಿವಾರ ಸಂಜೆ 6.30 ಕ್ಕೆ ದೇವಸ್ಥಾನದಲ್ಲಿ ಹನುಮಾನ್ ಚಾಲಿಸ್ ಪಠಣ ನಡೆಯಲಿದೆ.

ನಾಳೆ ಶುಕ್ರವಾರ ದೇವಿಗೆ ಬೆಳಿಗ್ಗೆ 8 ಕ್ಕೆ ಪಂಚದ್ರವ್ಯ ಪಂಚಾಮೃತಾಭಿಷೇಕ ಮಾಡಲಾಗುವುದು. ಮಧ್ಯಾಹ್ನ 12.05 ಕ್ಕೆ ಶ್ರೀ ಮಾತಾ ಅನ್ನಪೂರ್ಣೇಶ್ವರಿ ರಥೋತ್ಸವ  ಜರುಗಲಿದೆ. ಸಂಜೆ 5 ಕ್ಕೆ ಶ್ರೀ ವಾಸವಿ ಯುವತಿಯರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.  

error: Content is protected !!