ನಗರದ ದೇವರಾಜ ಅರಸು ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದು

ನಗರದ ದೇವರಾಜ ಅರಸು ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದು

ಡಿ. ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಮಾತಾ ಅನ್ನಪೂರ್ಣೆಶ್ವರಿ ದೇವಸ್ಥಾನದ 26 ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವು ನಿನ್ನೆ ಆರಂಭಗೊಂಡಿದ್ದು, ಇದೇ ದಿನಾಂಕ 16 ರವರೆಗೆ ಹಮ್ಮಿಕೊಳ್ಳಲಾಗಿದೆ.

ಇಂದು ಬೆಳಿಗ್ಗೆ 8 ಗಂಟೆಯಿಂದ ಅಭಿಷೇಕ, ಕಳಸ ಸ್ಥಾಪನೆ, ನವಗ್ರಹ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ಮಂತ್ರಪುಷ್ಪ, ಅಷ್ಟಾವಧಾನ ಸೇವೆ, ತೀರ್ಥಪ್ರಸಾದ ವಿನಿಯೋಗವಿದೆ. ಸಂಜೆ 7 ಗಂಟೆಗೆ `ಶಿವ ದಾಕ್ಷಾಯಿಣಿ ನೃತ್ಯ ವೈಭವ’ ರೂಪಕವನ್ನು ತಪಸ್ಯ ವಾಸವಿ ಸಂಸ್ಥೆಯ ಮಕ್ಕಳು ಪ್ರದರ್ಶಿಸಲಿದ್ದಾರೆ.

ನಾಳೆ ಗುರುವಾರ ಬೆಳಿಗ್ಗೆ 8 ಗಂಟೆಗೆ ಪಂಚಾಮೃತ ಅಭಿಷೇಕ, ಮಂಡಲ ಆರಾಧನೆ, ರುದ್ರಹೋಮ, ವಿವಿಧ ಪೂಜಾ ಕಾರ್ಯಕ್ರ ಮಗಳು ಜರುಗಲಿವೆ. ಸಂಜೆ 5 ಕ್ಕೆ ಶ್ರೀ ಗಿರಿಜಾ ಶಂಕರ ಕಲ್ಯಾಣ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನ ಪುರೋಹಿತರಾದ ಜಿ. ಪ್ರವೀಣ್ ಅವರಿಂದ ನಡೆಯಲಿದೆ. ಇದಲ್ಲದೇ ಪ್ರತಿ ಶನಿವಾರ ಸಂಜೆ 6.30 ಕ್ಕೆ ದೇವಸ್ಥಾನದಲ್ಲಿ ಹನುಮಾನ್ ಚಾಲಿಸ್ ಪಠಣ ನಡೆಯಲಿದೆ.

error: Content is protected !!