ಕ್ರಿಕೆಟ್ ಭೀಷ್ಮ ಸಿ.ಕೆ.ಮೂರ್ತಿ ಸ್ಮರಣಾರ್ಥ ಟೂರ್ನಿ

ಕ್ರಿಕೆಟ್ ಭೀಷ್ಮ ಸಿ.ಕೆ.ಮೂರ್ತಿ ಸ್ಮರಣಾರ್ಥ ಟೂರ್ನಿ

ಇಂದು, ಐದು ತಂಡಗಳ ಟಿ-20 ಟೂರ್ನಿಗೆ ದಿನೇಶ್‌ ಶೆಟ್ಟಿ ಚಾಲನೆ

ದಾವಣಗೆರೆ ಕ್ರಿಕೆಟ್ ಭೀಷ್ಮ ಖ್ಯಾತಿಯ ದಾವಣಗೆರೆ ಕ್ರಿಕೆಟ್ ಕ್ಲಬ್‌ನ ಕ್ರಿಕೆಟ್ ಗುರು ದಿ. ಸಿ.ಕೆ.ಮೂರ್ತಿ ಸ್ಮರಣಾರ್ಥ ಕ್ರಿಕೆಟ್ ಪ್ರತಿಭಾನ್ವೇಷಣೆಗೆ ಪೂರಕವಾಗಿ ಇಂದು ಮತ್ತು ನಾಳೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಐದು ತಂಡಗಳನ್ನು ಒಳಗೊಂಡ ಡಿಸಿಸಿ ಗುರು ಸಿ.ಕೆ.ಮೂರ್ತಿ ಸ್ಮರಣಾರ್ಥ ಟಿ-20 ಕ್ರಿಕೆಟ್ ಪಂದ್ಯಾವಳಿ-2024ನ್ನು ಹಮ್ಮಿಕೊಳ್ಳಲಾಗಿದೆ. 

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ 9ಕ್ಕೆ ದಾವಣಗೆರೆ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ, ಹಿರಿಯ ಕ್ರೀಡಾಪಟು ದಿನೇಶ್‌ ಕೆ.ಶೆಟ್ಟಿ ಪಂದ್ಯಾವಳಿ ಉದ್ಘಾಟಿಸುವರು. ಕ್ಲಬ್‌ನ ಹಿರಿ ಹಾಗೂ ಕಿರಿಯ ಕ್ರೀಡಾಪಟುಗಳು ಭಾಗವಹಿಸುವರು. ಐದು ತಂಡಗಳು ಪಾಲ್ಗೊಳ್ಳುವ ಪಂದ್ಯಾವಳಿಯು ಲೀಗ್ ಮಾದರಿಯಾಗಿದೆ. ಟಿ-20 ಬಿಳಿ ಬಣ್ಣದ ಬಾಲ್‌ಗಳ ಪಂದ್ಯಾವಳಿ ಇದಾಗಿದೆ ಎಂದು ಪಂದ್ಯಾವಳಿಯ ಉಸ್ತುವಾರಿಯಾದ ಹಿರಿಯ ಕ್ರಿಕೆಟ್ ಪಟು ಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

error: Content is protected !!