ದಾವಣಗೆರೆ, ಫೆ.4- ಬಿಜಿಪಿ ರಾಜ್ಯ ಅಧ್ಯಕ್ಷರ ಆದೇಶದಂತೆ ಪ್ರತಿ ಭಾ.ಜ.ಪ ಕಾರ್ಯಕರ್ತರ ಮನೆ ಗೋಡೆಯ ಮೇಲೆ `ಮತ್ತೊಮ್ಮೆ ಮೋದಿ -2024′ ಅಭಿಯಾನಕ್ಕೆ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ತಮ್ಮ ಮನೆಯ ಗೊಡೆಯ ಮೇಲೆ ಬರಹಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಡಿ. ಎಲ್. ಶಿವಪ್ರಕಾಶ್, ಕೆ.ಎಂ.ವೀರೇಶ್ ಪೈಲ್ವಾನ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಯಲ್ಲೇಶ್, ಉತ್ತರ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಶಶಿಕುಮಾರ್, ಮಾಂತೇಶ್, ದಂಡಪಾಣಿ, ಯಗ್ಗಪ್ಪ, ಗುರು, ಮತ್ತಿತರರು ಉಪಸ್ಥಿತರಿದ್ದರು