ಚೀಪ್ ಗಿಮಿಕ್ ಮಾಡದೇ ಭಾರತದ ಅಭಿವೃದ್ಧಿ ಪರವಾದ ಆಯವ್ಯಯ

ಚೀಪ್ ಗಿಮಿಕ್ ಮಾಡದೇ ಭಾರತದ ಅಭಿವೃದ್ಧಿ ಪರವಾದ ಆಯವ್ಯಯ

ಚುನಾವಣೆ ಸಮೀಪವಿದ್ದಾಗಲೂ ಯಾವುದೇ ಚೀಪ್ ಗಿಮಿಕ್ ಮಾಡದೇ ಭಾರತದ ಅಭಿವೃದ್ಧಿ ಪರವಾದ ಆಯವ್ಯಯವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದೆ. 

ಭಾರತವನ್ನು ಆಳಿದ ಬ್ರಿಟಿಷರನ್ನು ಹಿಂದಿಕ್ಕಿ ನಮ್ಮ ದೇಶವೀಗ ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಕಳೆದ 9 ವರ್ಷಗಳಿಂದ ದೇಶದ 25 ಕೋಟಿಗೂ ಹೆಚ್ಚು ಜನರು ಬಡತನ ರೇಖೆಯಿಂದ ಹೊರಬಂದು, ಆರ್ಥಿಕವಾಗಿ ಸಬಲರಾಗಿದ್ದಾರೆ. ಇಂತಹ ನೂರೆಂಟು ಮೈಲಿಗಲ್ಲುಗಳು ಮೋದಿಯವರ ಸಾರಥ್ಯದ ಬಜೆಟ್ ಮತ್ತು ಜನಪರ ಕಾರ್ಯಕ್ರಮಗಳ ಮೂಲಕ ಸಾಧ್ಯವಾಗಿದೆ.

ಮೂರನೇ ಬಾರಿ ಮೋದಿ ಸರ್ಕಾರ ಆಯ್ಕೆ ಆಗಲಿದ್ದು, ಜೂನ್ ತಿಂಗಳಲ್ಲಿ ಪೂರ್ಣಾವಧಿ ಬಜೆಟ್ ಮಂಡಿಸಿ, ದೇಶದ ಪ್ರಗತಿಗೆ ಇನ್ನಷ್ಟು ಹೊಸ ವೇಗ ತರುವುದು ಖಚಿತ. ದೂರದೃಷ್ಟಿ ಮತ್ತು ಅಭಿವೃದ್ಧಿಯ ರೂಪುರೇಷೆಯ ಆಯವ್ಯಯ ನೀಡಿದ ಕೇಂದ್ರ ಸರ್ಕಾರಕ್ಕೆ ದಾವಣಗೆರೆ ಜಿಲ್ಲೆಯ ಜನತೆಯ ಪರವಾಗಿ ದಾವಣಗೆರೆ ಬಿಜೆಪಿ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಡಾ. ರವಿಕುಮಾರ್ ಟಿ.ಜಿ. ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!