ರಾಣೇಬೆನ್ನೂರು, ಜ. 30 – ಇಲ್ಲಿನ ಶ್ರೀ ಮಾರ್ತಾಂಡ ನೃತ್ಯ ಮತ್ತು ಸಂಗೀತ ಕಲಾ ಸಂಸ್ಥೆಯ ದ್ವಿದಶಕದ ಹುಟ್ಟು ಹಬ್ಬ ಶ್ರೀ ಮಾರ್ತಾಂಡ ಉತ್ಸವವು ದಿನಾಂಕ 3 ರ ಸಂಜೆ ಹಲಗೇರಿ ರಸ್ತೆಯ ಬಿಎಜೆಎಸ್ ಎಸ್ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಆರ್.ಎಂ. ಕುಬೇರಪ್ಪ, ನೃತ್ಯ ಶಿಕ್ಷಕ ಕೆ. ರಾಮಮೂರ್ತಿರಾವ್, ಕೆ.ಜಿ. ಕುಲ್ಕರ್ಣಿ, ಸಂಧ್ಯಾ ವೈದ್ಯ, ಪಾಲ್ಗೊಳ್ಳುವರು. ಶ್ರೀ ನಿವಾಸ ಕುಲ್ಕರ್ಣಿ ಅವರ ಸಂಯೋಜನೆಯ ನವರಸ ನಟರಾಜ ಪ್ರದರ್ಶನ ಹಾಗೂ ಚಿತ್ರದುರ್ಗದ ಡಾ: ನಂದಿನಿ ಶಿವಪ್ರಕಾಶ ಅವರಿಗೆ ಸನ್ಮಾನ ನಡೆಯಲಿದೆ ಎಂದು ಸಂಸ್ಥೆಯ ಅದ್ಯಕ್ಷ ಗುಡ್ಡು ನಾಡಿಗೇರ, ಕಾರ್ಯದರ್ಶಿ ಮಮತಾ ನಾಡಿಗೇರ ತಿಳಿಸಿದ್ದಾರೆ.
ರಾಣೇಬೆನ್ನೂರು : ಮಾರ್ತಾಂಡ ಉತ್ಸವ
![27 rnr mathanda 31.01.2024 ರಾಣೇಬೆನ್ನೂರು : ಮಾರ್ತಾಂಡ ಉತ್ಸವ](https://janathavani.com/wp-content/uploads/2024/01/27-rnr-mathanda-31.01.2024.jpg)