ಕೊಟ್ಟೂರು ಜಾತ್ರೆ: ಮಾ.1 ರಿಂದ ಪಾದಯಾತ್ರೆ

ಕೊಟ್ಟೂರು ಜಾತ್ರೆ: ಮಾ.1 ರಿಂದ ಪಾದಯಾತ್ರೆ

ದಾವಣಗೆರೆ, ಜ. 28 – ಮಾರ್ಚ್ 4ರ ಸೋಮವಾರ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ಪ್ರಯುಕ್ತ ಮಾರ್ಚ್ 1ರ ಶುಕ್ರವಾರ   ಸಂಜೆಯಿಂದ  ಭಕ್ತರು ಪಾದಯಾತ್ರೆ ಹೊರಡಲಿದ್ದಾರೆ. ಅರಸೀಕೆರೆ ಶ್ರೀ ಗುರು ಕೋಲಶಾಂತೇಶ್ವರ ವಿರಕ್ತ ಮಠದಲ್ಲಿ ಪಾದಯಾತ್ರಿಗಳಿಗೆ ಪ್ರಸಾದ ದಾಸೋಹ ಸೇವೆ ಮಾಡುವ ಭಕ್ತರು, ದಾನಿಗಳು ದೇವಸ್ಥಾನ ಸಮಿತಿಯ ಕಣಕುಪ್ಪಿ ಮುರುಗೇಶಪ್ಪ (96118 89151) ಟಿ.ಜಿ. ಬಕ್ಕೇಶಪ್ಪ (91089 88898) ಬಿ. ಚಿದಾನಂದಪ್ಪ (98445 28449) ಮಲ್ಲಾಬಾದಿ ಗುರುಬಸವರಾಜ್ (79757 97079) ಅವರನ್ನು ಸಂಪರ್ಕಿಸಬಹುದು. ದಾಸೋಹ ಮನೆ ಮತ್ತು ಸಭಾಂಗಣ ಕಟ್ಟಡವು ಪ್ರಗತಿ ಹಂತದಲ್ಲಿದೆ. ಭಕ್ತಾದಿಗಳು ದೇಣಿಗೆ ಸಲ್ಲಿಸಲು ಕೋರಿದೆ. 

error: Content is protected !!