ರಾಣೇಬೆನ್ನೂರು, ಜ. 24 – ತಾಲ್ಲೂಕಿನ ಎಂ.ಕೆ. ಪಿಯು ಕಾಲೇಜಿನಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಪರೀಕ್ಷೆ ನಡೆಸುವ ಮೂಲಕ ಪ್ರತಿಭೆಗಳನ್ನು ಗುರುತಿಸುವ ಕಾರ್ಯಕ್ರಮ ನಡೆಸುತ್ತಿರುವದಾಗಿ ಸಂಘಟಕ ನಿಖಿಲ್ ಕುಂಟೆ ತಿಳಿಸಿದ್ದಾರೆ.
ದಿನಾಂಕ 28 ರಂದು ನಡೆಯುವ ಈ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳು ಭಾಗವಹಿಸಲಿದ್ದು ಪ್ರಶ್ನೆ ಪತ್ರಿಕೆಗೆ ಉತ್ತರಿಸಲು 1 ಗಂಟೆ ಅವಧಿ ನಿಗದಿಗೊಳಿಸಲಾಗಿದೆ. ಪ್ರಥಮ 10 ಸಾವಿರ, ದ್ವಿತೀಯ 7 ಸಾವಿರ, ತೃತೀಯ 5 ಸಾವಿರ ನಗದು ಬಹುಮಾನ ಪಡೆಯುವರು ಹಾಗೂ ನಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 14 ಲಕ್ಷ ಹಣದ ಸ್ಕಾಲರ್ ಶಿಪ್ ಕೊಡಲಾಗುವುದು ಎಂದು ವಿವರಿಸಿದರು. ಗೋಷ್ಠಿಯಲ್ಲಿ ಪ್ರಧಾನ ನಿರ್ದೇಶಕ ಎಸ್.ಆರ್.ಎಲಿ, ಪ್ರಾಚಾರ್ಯ ಮಹೇಶ ಹೆಗಡೆ ಇದ್ದರು.