ಹರಿಹರ ತಾಲ್ಲೂಕು ದೇವರಬೆಳಕೆರೆ ಗ್ರಾಮದ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ ಭಂಡಾರದ ಹುಣ್ಣಿಮೆ ಮತ್ತು ಭಂಡಾರ ಹಣಿಯುವ ಕಾರ್ಯಕ್ರಮ ಇಂದು ಸಂಜೆ 7.30 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ರಾತ್ರಿ 8.30 ರಿಂದ ಶ್ರೀ ಸ್ವಾಮಿ ಪಲ್ಲಕ್ಕಿ ಉತ್ಸವ ಗ್ರಾಮದ ರಾಜಬೀದಿಗಳಲ್ಲಿ ಜರುಗಲಿದೆ. ನಾಳೆ ಶುಕ್ರವಾರ ಸಂಜೆ 7 ಗಂಟೆಗೆ ಭಂಡಾರ ಅಳೆಯುವುದು ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ದೇವರಬೆಳಕೆರೆಯಲ್ಲಿ ಇಂದು ಹುಣ್ಣಿಮೆ
![13 dbkere 25.01.2024 ದೇವರಬೆಳಕೆರೆಯಲ್ಲಿ ಇಂದು ಹುಣ್ಣಿಮೆ](https://janathavani.com/wp-content/uploads/2024/01/13-dbkere-25.01.2024.jpg)