ಅರೆ ನೀರಾವರಿ ಬೆಳೆ ಬೆಳೆಯಲು ಸಲಹೆ

ದಾವಣಗೆರೆ, ಜ.18- ಕರ್ನಾಟಕ ನೀರಾವರಿ ನಿಗಮದ ಭದ್ರಾ ನಾಲಾ  ಜಿಲ್ಲಾ ವ್ಯಾಪ್ತಿಗೆ ಒಳಪಡುವ ರೈತರು ಬೇಸಿಗೆ ಹಂಗಾಮಿನಲ್ಲಿ ತೋಟವನ್ನು ಹೊರತುಪಡಿಸಿ ಇತರೆ ಬೆಳೆ ಬೆಳೆಯದಂತೆ ಸಲಹೆ ನೀಡಲಾಗಿದೆ.  

 ಪ್ರಸ್ತುತ ಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಗಣನೆಗೆ ತೆಗೆದುಕೊಂಡು ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ  23-24ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಭದ್ರಜಲಾಶಯದಿಂದ ನೀರನ್ನು ಹರಿಸಲಾಗುವುದು. ಈಗಾಗಲೇ ಬಲದಂಡೆ ಕಾಲುವೆಗೆ ಜನವರಿ 15 ರಿಂದ ನೀರನ್ನು ಹರಿಸಲಾಗಿದೆ.

ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಜನ ಜಾನುವಾರುಗಳಿಗೆ ಕುಡಿಯಲು ಹಾಗೂ ಬೆಳೆದು ನಿಂತ ತೋಟಗಳಿಗೆ ಮಾತ್ರ ನೀರನ್ನು ಹರಿಸಲಾಗುವುದು.  ಬೆಳೆದು ನಿಂತಿರುವ ತೋಟಗಾರಿಕೆ ಬೆಳೆಗಳನ್ನು ಹೊರತುಪಡಿಸಿ. ಭತ್ತ ಅಥವಾ ಇತರೆ ಯಾವುದೇ ಬೆಳೆಯನ್ನು ಈ ಹಂಗಾಮಿನಲ್ಲಿ ಬೆಳೆಯದಿರಲು ಭದ್ರಾ ನಾಲಾ ಸಂ.5 ರ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!