ವಾಯು ವಿಹಾರಿಗಳಿಂದ 21ರಂದು ಹರಿಹರಕ್ಕೆ ಕಾಲ್ನಡಿಗೆ

ದಾವಣಗೆರೆ, ಜ.17- ನಗರದ ಕುಂದವಾಡಕೆರೆ ವಾಯುವಿಹಾರ ಬಳಗದ ವತಿಯಿಂದ ಇದೇ ದಿನಾಂಕ 21ರ ಭಾನುವಾರ ಬೆಳಿಗ್ಗೆ 5-40ಕ್ಕೆ ಪಿ.ಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಬಿಎಸ್ಎನ್ಎಲ್ ಕಚೇರಿ ಬಳಿಯಿಂದ ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದವರೆಗೆ ಕಾಲ್ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕರಲ್ಲೊಬ್ಬರಾದ ಈಶ್ವರ ಸಿಂಗ್ ಕವಿತಾಳ್ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ: 8971389102, 9844127137, 9448375866.

error: Content is protected !!