ಹರಪನಹಳ್ಳಿ : ಆದರ್ಶ ವಿದ್ಯಾಲಯದ 6ನೇ ತರಗತಿ ದಾಖಲಾತಿಗಾಗಿ ಅರ್ಜಿ ಆಹ್ವಾನ

ಹರಪನಹಳ್ಳಿ, ಜ.17- ತಾಲ್ಲೂಕಿನ ಅನಂತನಹಳ್ಳಿ ಸಮೀಪದ ಸರ್ಕಾರಿ ಆದರ್ಶ ವಿದ್ಯಾಲಯದ ಆರನೇ ತರಗತಿಯ ದಾಖಲಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿರುವ ತಾಲ್ಲೂಕಿನ ನಿವಾಸಿಗಳು ಹಾಗೂ ಹರಪನಹಳ್ಳಿ ತಾಲ್ಲೂಕಿನ ನಿವಾಸಿಗಳ ಮಕ್ಕಳು ಬೇರೆ ತಾಲ್ಲೂಕು, ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುವವರೂ ಸಹ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೋರಿದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜ.17 ರಿಂದ ಪ್ರಾರಂಭವಾಗಿ ಬರುವ ಫೆ. 6 ರವರಿಗೆ ಕೊನೆಗೊಳ್ಳುತ್ತದೆ. ಅರ್ಜಿ ಸಲ್ಲಿಸುವ ಆನ್‌ಲೈನ್ ವಿಳಾಸ www.schooleducation.kar.nic.in, www.vidyavahini.karnataka.gov.in. ಮಾ. 3 ರಂದು ಪರೀಕ್ಷೆ ನಡೆಯುವ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಮುಖ್ಯೋಪಾಧ್ಯಾಯರು ಹೆಚ್.ಕೆ.ಚಂದ್ರಪ್ಪ (9880955078), ನೋಡಲ್ ಅಧಿಕಾರಿ ಗಳು ಮತ್ತು ಶಿಕ್ಷಣ ಸಂಯೋಜಕರಾದ ಗಿರಜ್ಜಿ ಮಂಜುನಾಥ (7975534725), ಪ್ರಥಮ ದರ್ಜೆ ಸಹಾಯಕ ದರ್ಶನ್ (96119 61461) ಇವರನ್ನು ಸಂಪರ್ಕಿಸಲು ಕೋರಿದೆ.

error: Content is protected !!