ಜಿಗಳಿ ರಂಗನಾಥ್‌ಗೆ ಕನಕಶ್ರೀ ಚೇತನ ಪತಂಜಲಿ ಪ್ರಶಸ್ತಿ

ಜಿಗಳಿ ರಂಗನಾಥ್‌ಗೆ ಕನಕಶ್ರೀ ಚೇತನ ಪತಂಜಲಿ ಪ್ರಶಸ್ತಿ

ಮಲೇಬೆನ್ನೂರು, ಜ.16- ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯು ತನ್ನ 26 ನೇ ವರ್ಷದ ಶುಭ ಸಂದರ್ಭದಲ್ಲಿ ಮತ್ತು 536ನೇ ಶ್ರೀ ಕನಕದಾಸರ ಜಯಂತಿಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ, ಕೊಡಮಾಡುವ ರಾಜ್ಯ ಮಟ್ಟದ `ಕನಕಶ್ರೀ ಚೇತನ ಪತಂಜಲಿ ರತ್ನ’ ಪ್ರಶಸ್ತಿಗೆ ಬೀದಿ ನಾಟಕ ಕಲಾವಿದ  ಜಿಗಳಿಯ ಡಿ.ರಂಗನಾಥ್ ಆಯ್ಕೆಯಾಗಿದ್ದಾರೆ.

ಶಿವಮೊಗ್ಗ ನಗರದ ಪತಂಜಲಿ ಯೋಗ ಮಂದಿರ ದಲ್ಲಿ ಫೆ.4 ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವು ದೆಂದು ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಅಧ್ಯಕ್ಷರಾದ ಎ.ಹೆಚ್.ಶ್ಯಾಮಲಾ ತಿಳಿಸಿದ್ದಾರೆ.

error: Content is protected !!