ಹರಿಹರದಲ್ಲಿ ದಿಂಡಿ ಮಹೋತ್ಸವ

ಹರಿಹರ, ಜ.16- ನಗರದ ಸಹಸ್ರಾರ್ಜುನ ವೃತ್ತದಲ್ಲಿರುವ ಎಸ್. ಎಸ್.ಕೆ. ಸಮಾಜದ ಶ್ರೀ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ದಿಂಡಿ ಮಹೋತ್ಸವ ಹಾಗೂ ನಾಮ ಸಪ್ತಾಹ ಕಾರ್ಯಕ್ರಮ ಮತ್ತು ಮಂಡಕ್ಕಿ ಪಳಹಾರ ವಿತರಣೆ, ಮಹಾಮಂಗಳಾರತಿ ಸೇರಿದಂತೆ ಪೂಜಾ ಕಾರ್ಯಗಳು  ನಡೆದವು. 

ಇದೇ ಸಂದರ್ಭದಲ್ಲಿ ಎಸ್.ಎಸ್.ಕೆ. ಸಮಾಜದವರು ಮತ್ತು ಭಾವಸಾರ ಕ್ಷತ್ರಿಯ ಸಮಾಜದ ಸಂತರು ಭಜನೆ ನಡೆಸಿಕೊಟ್ಟರು. 

ಎಸ್.ಎಸ್.ಕೆ. ಸಮಾಜದ ಗೌರವ ಅಧ್ಯಕ್ಷ ಅಂಬಾ ಸಾ ಮೆಹರ್ವಾಡೆ, ಅಧ್ಯಕ್ಷ ನಾಗರಾಜ್ ಮೆಹರ್ವಾಡೆ, ಮೋಹನ್ ಕಿರೋಜಿ, ಕೃಷ್ಣ ಪೂಜಾರಿ,  ಪರಶುರಾಮ್ ಕಾಟ್ವೆ,  ತುಳಜಪ್ಪ ಭೂತೆ, ದುರ್ಗಾಸಾ ಕಾಟ್ವೆ, ರಮೇಶ್ ಕಾಟ್ವೆ, ಕೃಷ್ಣ ಪಿ ರಾಜೋಳ್ಳಿ, ಶಂಕರ್ ಸಾ, ವಾಸು ಮೆಹರ್ವಾಡೆ, ಅನಿಲ್ ಕಠಾರೆ, ಶ್ರೀಕಾಂತ್ ಮೆಹರ್ವಾಡೆ, ಅಂಬುಜಾ ಮಹೆರ್ವಾಡೆ, ಸೇವಂತಿ ಬಾಯಿ ಕೃಷ್ಣ ಸಾ ಭೂತೆ, ಅಶೋಕ ಭೂತೆ, ಮಂಜು  ಮೆಹರ್ವಾಡೆ, ಅಂಬಾಸಾ ಮೆಹರ್ವಾಡೆ, ಮೋತಿಲಾಲ್ ಕಿರೋಜಿ,  ಸುಧಾ ಸೋಳಂಕಿ, ಸಾಕಮ್ಮ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.  

error: Content is protected !!