ಹೊನ್ನಾಳಿ, ಜ. 15- ಹೊನ್ನಾಳಿ ಅರ್ಬನ್ ಸೊಸೈಟಿಗೆ ನಾಮಪತ್ರ ವಾಪಾಸ್ ಪಡೆಯಲು ಅಂತಿಮ ದಿನ ವಾದ ಇಂದು ಹದಿನೈದು ನಿರ್ದೇಶಕರ ಆಯ್ಕೆ ಪ್ರಕ್ರಿಯೆಯಲ್ಲಿ ನಾಲ್ವರು ಅಭ್ಯ ರ್ಥಿಗಳು ಅವಿರೋಧವಾಗಿ ಆಯ್ಕೆಯಾ ಗಿದ್ದು, ಉಳಿದ 11 ಅಭ್ಯರ್ಥಿಗಳ ಆಯ್ಕೆಗೆ ಇದೇ ದಿನಾಂಕ 21 ರಂದು ಭಾನುವಾರ ಪಟ್ಟಣದ ಭಾರತೀಯ ವಿದ್ಯಾಸಂಸ್ಥೆ ಆವರಣದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿ ಕಾರಿ ನವೀನಕುಮಾರ್ ತಿಳಿಸಿದರು.
ಅವಿರೋಧವಾಗಿ ಪರಿಶಿಷ್ಟ ಜಾತಿ ರಾಜಾನಾಯ್ಕ, ಪರಿಶಿಷ್ಟ ಪಂಗಡದ ಪ್ರಸಾದ್, ಮಹಿಳಾ ಸದಸ್ಯೆ ನಾಗರತ್ನ, ರೂಪ ಆಯ್ಕೆಯಾದವರು.
ಪ್ರವರ್ಗ `ಅ’ ಒಂದು ಕ್ಷೇತ್ರಕ್ಕೆ ಅನಿಲ, ರಘು, ಶಿವಮೂರ್ತಿ ನಾಮಪತ್ರ ಸಲ್ಲಿಸಿದರೆ, ಪ್ರವರ್ಗ `ಬ’ ಕ್ಷೇತ್ರಕ್ಕೆ ನಾಗರಾಜ, ಶಾಂತಲಾ ನಾಮಪತ್ರ ಸಲ್ಲಿಸಿದರು.
ಸಾಮಾನ್ಯ ಕ್ಷೇತ್ರದ 9 ಅಭ್ಯರ್ಥಿಗಳ ಆಯ್ಕೆಗೆ 12 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದು, ಚುನಾವಣಾ ಕಣದಲ್ಲಿರುವವರು ಅರುಣಕುಮಾರ್, ಬೆಳಗುತ್ತಿ ಉಮೇಶ್, ಜಯರಾವ್, ನಾಗರಾಜ್, ಪ್ರಕಾಶ್, ಮೋಹನ್, ಮಂಜಪ್ಪ, ರವಿಕುಮಾರ್, ಡಾ. ರಾಜಕುಮಾರ್, ವೀರೇಶ್, ಶಿವಾನಂದಸ್ವಾಮಿ, ಸುಂದರೇಶ್.