ದುರ್ಗಾಂಬಿಕ ಕ್ಯಾಂಪಿನಲ್ಲಿ ಇಂದು-ನಾಳೆ ದುರ್ಗಾಂಬಿಕ ದೇವಿ ಜಾತ್ರೆ

ದಾವಣಗೆರೆ ತಾಲ್ಲೂಕು ಮುದಹದಡಿ ಸಮೀಪದ ಶ್ರೀ ದುರ್ಗಾಂಬಿಕ ಕ್ಯಾಂಪಿನಲ್ಲಿ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ಇಂದು ಮತ್ತು ನಾಳೆ ಜರುಗಲಿದೆ. ಇಂದು ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ 11.30 ಕ್ಕೆ ಕನ್ಯಾ ಲಗ್ನದಲ್ಲಿ ಗದಿಗಯ್ಯ ಶಾಸ್ತ್ರಿ ಹಿರೇಮಠ ಅವರಿಂದ ದೇವಿಯ ಶಾಂತಿ ಹೋಮ ಮತ್ತು ಅಭಿಷೇಕ ನಡೆಯಲಿದೆ. ನಾಳೆ ಬುಧವಾರ ಬೆಳಿಗ್ಗೆ 8.30 ಕ್ಕೆ ಮಕರ ಲಗ್ನದಲ್ಲಿ ಭಜನೆ, ಡೊಳ್ಳು, ಬ್ಯಾಂಡ್ ಸೆಟ್, ಕುಂಭ ಮೇಳದೊಂದಿಗೆ ಮೆರವಣಿಗೆ ಮೂಲಕ ಗಂಗಾಪೂಜೆ ಕಾರ್ಯಕ್ರಮ ಜರುಗಲಿದೆ.

ಶಾಸಕ ಶಾಮನೂರು ಶಿವಶಂಕರಪ್ಪ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಅಖಿಲ ಭಾರತ ವಿಶ್ವಕರ್ಮ ಪರಿಷತ್ ಜಿಲ್ಲಾಧ್ಯಕ್ಷ ಎಂ.ಇ. ಮೌನೇಶ್ವರಚಾರಿ, ಗ್ರಾ.ಪಂ. ಉಪಾಧ್ಯಕ್ಷೆ ಮಂಜಮ್ಮ ರೇವಣಸಿದ್ದಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.

error: Content is protected !!