ಮಲೇಬೆನ್ನೂರಿನ ಪುರಸಭೆ ಆಶ್ರಯ ಸಮಿತಿಗೆ ನೇಮಕ

ಮಲೇಬೆನ್ನೂರಿನ ಪುರಸಭೆ ಆಶ್ರಯ ಸಮಿತಿಗೆ ನೇಮಕ

ಮಲೇಬೆನ್ನೂರು, ಜ.11- ಪುರಸಭೆಯ ಆಶ್ರಯ ಸಮಿತಿಗೆ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರ್ಕಾರದ ವಸತಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. 

ಕಣ್ಣಾಳ್ ನಾಗರಾಜ್, ಪಿ.ಎಸ್. ನಾರಾಯಣಪ್ಪ, ಫಕೃದ್ದೀನ್ ಅಲಿ ಅಹ್ಮದ್ ಮತ್ತು ಚಂದ್ರಮ್ಮ ಕೋಂ ಎ.ಕೆ. ಪ್ರಕಾಶ್ ಅವರನ್ನು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮತ್ತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಶಿಫಾರಸ್ಸಿನ ಮೇರೆಗೆ ಪುರಸಭೆ ಆಶ್ರಯ ಸಮಿತಿಗೆ ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ ತಿಳಿಸಿದ್ದಾರೆ.

error: Content is protected !!