ಲಿಂಗರಾಜ್ ವಿರಚಿತ `ಚಾರ್ ಧಾಮ್’ ಒಂದು ಪ್ರವಾಸ ಕಥನ ಪುಸ್ತಕ ಬಿಡುಗಡೆ

ಹೊಳಲ್ಕೆರೆ, ಜ. 11- ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಹೆಚ್.ಕೆ. ಲಿಂಗರಾಜ್ ಅವರು ರಚಿಸಿರುವ `ಚಾರ್ ಧಾಮ್’-ಒಂದು ಪ್ರವಾಸ ಕಥನ ಪುಸ್ತಕ ಬಿಡುಗಡೆ ಇದೇ ದಿನಾಂಕ 14 ರಂದು ತಮ್ಮ ಸ್ವಗ್ರಾಮ ಹೊಳಲ್ಕೆರೆ ತಾಲ್ಲೂಕು ಹಿರಿಯೂರು ಗ್ರಾಮದ ತೋಟದಲ್ಲಿ ಸಂಕ್ರಾಂತಿ ಭೋಜನ ಕಾರ್ಯಕ್ರಮದಲ್ಲಿ ನಡೆಯಲಿದೆ.

ದೇಶದ ಪವಿತ್ರ ಯಾತ್ರಾ ಸ್ಥಳಗಳಾದ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಬದರಿನಾಥ ಹಾಗೂ ಹಿಮಾಲಯ ಪರ್ವತಗಳ ಸಂದರ್ಶನ ಮಾಡಿ, ಅವುಗಳ ಕುರಿತು ಪ್ರವಾಸ ಕಥನ ರಚಿಸಿದ್ದಾರೆ. 

ಮುಖ್ಯ ಅತಿಥಿಗಳಾಗಿ ಡಾ. ಸಾಹುಕಾರ್, ಡಾ.ಕೆ.ಸಿ. ಶಿವಮೂರ್ತಿ, ಡಾ. ಜಿ. ಉಮೇಶ್, ಡಾ. ಸೂರ್ಯಪ್ರಕಾಶ್, ಎಸ್.ಡಿ. ದೇವೇಂದ್ರಪ್ಪ ದಂಪತಿಗಳು ಭಾಗವಹಿಸಲಿದ್ದಾರೆ. 

error: Content is protected !!