ಮೀಸಲಾತಿ: ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯಿಂದ ಹೆದ್ದಾರಿಯಲ್ಲಿ ಲಿಂಗಪೂಜೆ

ಮೀಸಲಾತಿ: ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯಿಂದ ಹೆದ್ದಾರಿಯಲ್ಲಿ ಲಿಂಗಪೂಜೆ

ರಾಣೇಬೆನ್ನೂರು, ಜ.8- ಪಂಚಮ ಸಾಲಿ ಎಲ್ಲ ಲಿಂಗಾಯತರಿಗೆ ಓಬಿಸಿ ಮೀಸಲಾತಿ ಕೊಡುವಂತೆ ಒತ್ತಾಯಿಸಿ, ಇದೇ ದಿನಾಂಕ 12 ರ ಶುಕ್ರವಾರ ಮೋಟೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿಂಗಪೂಜೆ ಮಾಡುವು ದರೊಂದಿಗೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಜಿಲ್ಲಾ ಮಟ್ಟದಲ್ಲಿ ಶಾಂತಿಯುತವಾಗಿ ಪೂಜೆಯೊಂದಿಗೆ ಹೆದ್ದಾರಿ ಬಂದ್ ಮಾಡುವುದರ ಮೂಲಕ ಒತ್ತಾಯಿಸಲಾಗುವುದು ಎಂದು ಹೇಳಿದರು. ಶ್ರೀಗಳ ಜೊತೆಗೆ ಸಮಾಜ ಮುಖಂಡರಾದ ಕೆ. ಶಿವಲಿಂಗಪ್ಪ, ಶಿವಪ್ಪ ಗುರಿಕಾರ, ಸಿದ್ದು ಚಿಕ್ಕಬಿದರಿ, ಬಿ.ಎನ್.ಪಾಟೀಲ ಮತ್ತಿತರರಿದ್ದರು.

error: Content is protected !!