ನಗರದಲ್ಲಿ ಇಂದು ಸೈಕಲ್‌, ತಿಂಡಿ ಗಾಡಿಗಳ ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟಿನಿಂದ 85ನೇ ಸೈಕಲ್‌ ಮತ್ತು 3 ತಿಂಡಿ ಗಾಡಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಕರುಣಾ ಜೀವಾ ಟ್ರಸ್ಟ್‌ ಕಚೇರಿಯಲ್ಲಿ ಇಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಶ್ರೀ ಪರಮೇಶ್ವರ ಸ್ವಾಮೀಜಿ (ಯರಗುಂಟೆ) ವಹಿಸುವರು. ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಸಿ.ಎನ್. ಜಯಪ್ರಕಾಶ್‌, ಎ. ಕಿರಣ್‌ಕುಮಾರ್‌, ಡಾ. ಹೆಚ್‌.ಜಿ. ಶ್ರೀಕಂಠಪ್ಪ ಆಗಮಿಸುವರು. ಡಾ. ಹೆಚ್‌.ಎನ್‌. ಮಲ್ಲಿಕಾರ್ಜುನ್‌ ಅಧ್ಯಕ್ಷತೆ ವಹಿಸುವರು.

error: Content is protected !!