ಹರಿಹರ ತಾಲ್ಲೂಕಿನ ದೀಟೂರು ಗ್ರಾಮದಲ್ಲಿ ಇಂದಿನಿಂದ ಮೂರು ದಿನ ಮಹೇಶ್ವರ ಸ್ವಾಮಿ ಜಾತ್ರೆ ನಡೆಯುವುದು.
ಇಂದು ರಾತ್ರಿ 9 ಗಂಟೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಮಹೇಶ್ವರಸ್ವಾಮಿ ಕಾರ್ತಿಕೋತ್ಸವ ಭಜನೆ, ಡೊಳ್ಳು, ಸಮಾಳ ಮತ್ತು (ಪುರುವಂತರು) ವೀರಗಾಸೆ ಮೇಳದವರಿಂದ ನಡೆಯುವವು.
ನಾಳೆ ಮಂಗಳವಾರ ತುಂಗಭದ್ರಾ ನದಿ ತೀರದಲ್ಲಿ ಹಾಕಿರುವ ಶ್ರೀ ಮಹೇಶ್ವರ ಸ್ವಾಮಿಗೆ ಮಹಾಪೂಜೆ ನಂತರ ಪ್ರಸಾದ ವಿನಿಯೋಗ ನಡೆಯುವುದು. ಸಂಜೆ 6.30ಕ್ಕೆ ಗ್ರಾಮದೇವತೆಗಳ ಕಾರ್ತಿಕೋತ್ಸವ ನಡೆಯಲಿದೆ.
ದಿನಾಂಕ 10ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಮಹೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವವು ಗ್ರಾಮದೊಳಗೆ ಪ್ರವೇಶಿಸುವುದು.
ಜಾತ್ರೆಯ ಅಂಗವಾಗಿ ದಿನಾಂಕ 9 ರ ಮಂಗಳವಾರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.