ಆರ್‌ಜಿಎಸ್‌ಗೆ ಇಂದು ಅಭಿನಂದನಾ ಕಾರ್ಯಕ್ರಮ

ಆರ್‌ಜಿಎಸ್‌ಗೆ  ಇಂದು ಅಭಿನಂದನಾ ಕಾರ್ಯಕ್ರಮ

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕನ್ನಿಕಾಪರಮೇಶ್ವರಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರೂ, ಜಿಲ್ಲಾ ಆರ್ಯವೈಶ್ಯ ಸಮಾಜ ಬಾಂಧವರೂ ಹಾಗೂ ಸಹಕಾರಿ ಬಂಧುಗಳೂ ಆದ ಶ್ರೀನಿವಾಸಮೂರ್ತಿ ಅವರಿಗೆ ಇಂದು ಸಂಜೆ 5.30ಕ್ಕೆ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಮನೂರು ಶಿವಶಂಕರಪ್ಪ, ಡಿ.ಎಸ್‌. ಅರುಣ್‌,  ಜೆ.ಆರ್‌. ಷಣ್ಮುಖಪ್ಪ ಮತ್ತು ಜಯಕರ್‌ ಶೆಟ್ಟಿ ಇಂದ್ರಾಳಿ ಅವರುಗಳು ಮುಖ್ಯ ಅತಿಥಿಗಳಾಗಿದ್ದಾರೆ.

ಆರ್‌.ಎಲ್‌. ಪ್ರಭಾಕರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ನಾಗೇಂದ್ ಪ್ರಕಾಶ್‌, ಆರ್‌.ಎಸ್‌. ನಾರಾಯಣಸ್ವಾಮಿ, ಎಸ್‌.ಸುನೀಲ್‌ ಮತ್ತು ಕಾಸಲ್‌ ವಿ. ಮಂಜುನಾಥ್‌ ಗೌರವ ಉಪಸ್ಥಿತರಿರುವರು.

error: Content is protected !!