ತಾಲ್ಲೂಕು ಕಸಾಪದಿಂದ ಇಂದು ಸಾಹಿತ್ಯೋತ್ಸವ

ದಾವಣಗೆರೆ ತಾಲ್ಲೂಕು ಕ.ಸಾ.ಪ. ಮತ್ತು ಹಿರಿಯ ನಾಗರಿಕರ ಸಹಾಯವಾಣಿ ಇವರ ಸಹಯೋಗದಲ್ಲಿ ಇಂದು ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ ಆವರಣದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಎಚ್‌. ನಿಂಗಪ್ಪ ಉದ್ಘಾಟಿಸುವರು. ಸುರೇಶ್‌ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದಾಸ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ವಿಷಯವಾಗಿ ಅಜಯ್‌ನಾರಾಯಣ್ ಉಪನ್ಯಾಸ ನೀಡಲಿದ್ದಾರೆ. ಜಿಗಳಿ ಎನ್.ಎಲ್. ಪ್ರಕಾಶ್, ಕೆ.ಜಿ. ಸೌಭಾಗ್ಯ, ನವೀನ್‌ಕುಮಾರ್, ಷಡಕ್ಷರಪ್ಪ ಎಂ. ಬೇತೂರು ಉಪಸ್ಥಿತರಿರುವರು. ಸುಮತಿ ಜಯ್ಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಜಿ.ವಿ. ಚನ್ನಬಸಪ್ಪ (ಶ್ರೀಮತಿ ಭಾಗೀರಥಮ್ಮ ದಿ. ಜಿ. ಬಸಪ್ಪ ಸ್ಮರಣಾರ್ಥ ದತ್ತಿ), ಶ್ರೀಮತಿ ಪದ್ಮ ಟಿ.ಆರ್, ತೆಲಗಿ ರುದ್ರೇಶ್ (ಶ್ರೀಮತಿ ಶಾರದಮ್ಮ ತೆಲಗಿ ಬಸವರಾಜಪ್ಪ ದತ್ತಿ), ಶ್ರೀಮತಿ ಸುಧಾ ಡಿ. ಸುರೇಂದ್ರಪ್ಪ (ಕುಕ್ಕುವಾಡದ ಶ್ರೀಮತಿ ಗಂಗಮ್ಮ ದ್ಯಾಮೇನಹಳ್ಳಿ ನಾಗಪ್ಪ ದತ್ತಿ) ಇವರುಗಳು ದತ್ತಿ ದಾನಿಗಳಾಗಿದ್ದಾರೆ.

error: Content is protected !!