ನಗರದಲ್ಲಿ ಇಂದು ದತ್ತಾತ್ರೇಯ ಜಯಂತಿ

ಪಿ.ಬಿ. ರಸ್ತೆಯ ಮುಂಡಾಸದ ಪುಟ್ಟಪ್ಪ ಲೇಔಟ್‌ನಲ್ಲಿರುವ ಸದ್ಗುರು ಶ್ರೀ ದತ್ತಾತ್ರೇಯ ಸೇವಾ ಸಮಿತಿ ವತಿಯಿಂದ ಸದ್ಗುರು ಶ್ರೀ ದತ್ತಾತ್ರೇಯ ಜಯಂತಿ ಕಾರ್ಯಕ್ರಮ ಇಂದು ನಡೆಯಲಿದೆ. 

ಬೆಳಿಗ್ಗೆ 7 ರಿಂದ 9 ರವರೆಗೆ ಅಭಿಷೇಕ ಮತ್ತು ಮಂಗಳಾರತಿ, 9 ರಿಂದ 10.30 ರವರೆಗೆ ಭಜನೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯುವುದು. ಬೆಳಿಗ್ಗೆ 10.30 ಕ್ಕೆ ಗುರುಗಳವರಿಂದ ಆಶೀರ್ವಚನ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಮಹಾಪ್ರಸಾಸ ನಡೆಯುವುದು.  ಶ್ರೀ ಸದ್ಗುರು ಮುರಳೀಧರ ಸ್ವಾಮೀಜಿ (ಹದಡಿ), ಯುಗಧರ್ಮ ರಾಮಣ್ಣ (ಸಿದ್ಧನಮಠ, ಚನ್ನಗಿರಿ ತಾ.), ಶ್ರೀ ಸಿದ್ದೇಶ್‌ (ಸಿದ್ಧನೂರು), ಶರಣೆ ಜಯದೇವಿ ತಾಯಿ ( ಮೈಸೂರು) ಇವರುಗಳಿಂದ ಆಶೀರ್ವಚನ ನಡೆಯುವುದು. 

ವಿಶೇಷ ಆಹ್ವಾನಿತರು : ಶಾಸಕ  ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ವಿನಾಯಕ ಪೈಲ್ವಾನ್‌, ರಾಜನಹಳ್ಳಿ ಶಿವಕುಮಾರ್‌, ಶ್ರೀಮತಿ ಆಶಾ ಉಮೇಶ್‌, ಡಿ.ಎಂ. ದೇವರಮನಿ ಶಿವರಾಜ್‌, ಆರ್.ಜಿ. ನಾಗೇಂದ್ರ ಪ್ರಸಾದ್‌, ದಿನೇಶ್‌ ಕೆ. ಶೆಟ್ಟಿ. 

error: Content is protected !!