ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯ ಕಡೇ ಕಾರ್ತಿಕೋತ್ಸವ ಇಂದು ನಡೆಯಲಿದೆ. ಸಂಜೆ 7 ಗಂಟೆಯಿಂದ ಸಣ್ಣ ರಥದಲ್ಲಿ ನಂದಿವಾಹನ ಮಹೋತ್ಸವವು ಜರುಗುವುದು. ನಂತರ ಕಡೇ ಕಾರ್ತಿಕೋತ್ಸವ ನಡೆಯುತ್ತದೆ.
ಕೆ.ಬಿ. ರಾಜು, ಚಿ. ಪ್ರತೀಕ್ ಮತ್ತು ಕುಟುಂಬ ದವರಿಂದ ಶ್ರೀ ಬಕ್ಕೇಶ್ವರ ಸ್ವಾಮಿ ಗದ್ದಿಗೆಗೆ ಹೂವಿನ ಅಲಂಕಾರ ಸೇವೆ ನಂತರ ರಾತ್ರಿ 10 ಗಂಟೆಯಿಂದ ಸಿಡಿಮದ್ದಿನ ಕಾರ್ಯಕ್ರಮವನ್ನು ದಿ. ಶ್ರೀ ಮಾಗಾನಹಳ್ಳಿ ಷಣ್ಮುಖಪ್ಪನವರ ಜ್ಞಾಪಕಾರ್ಥವಾಗಿ ಅವರ ಕುಟುಂದವರು ನಡೆಸಿಕೊಡುವರು ಎಂದು ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ಅಥಣಿ ಎಸ್. ವೀರಣ್ಣ ತಿಳಿಸಿದ್ದಾರೆ.