ನಗರದಲ್ಲಿ ಇಂದು ರಾಜ್ಯೋತ್ಸವ

ದಾವಣಗೆರೆ, ಡಿ.24- ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮಹಿಳಾ ಘಟಕದಿಂದ ಇಂದು ಸಂಜೆ 5 ಗಂಟೆಗೆ ಶ್ರೀ ಶಿವಯೋಗಾಶ್ರಮದ ಆವರಣದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷತೆ ಶುಭಮಂಗಳ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್‌, ಶಾಸಕರಾದ ಲತಾ ಮಲ್ಲಿಕಾರ್ಜುನ್‌, ಶಿಕ್ಷಣ ಕ್ಷೇತ್ರದ ಸಾಧಕಿ ಶೃತಿ ಇನಾಂದಾರ್‌ ಆಗಮಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ, ಎಸ್ಪಿ ಉಮಾ ಪ್ರಶಾಂತ್‌, ಆಯುಕ್ತೆ ರೇಣುಕಾ, ಎಸಿ ದುರ್ಗಾಶ್ರೀ, ಡಾ. ಶುಕ್ಲ ಶೆಟ್ಟಿ,   ಇಂದ್ರಮ್ಮ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ನಂತರ ಭಾರತಿ ವಾದ್ಯ ವೃಂದ ದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸ ಲಾಗಿದೆ. ಪತ್ರಿಕಾಗೋಷ್ಟಿಯಲ್ಲಿ ದ್ರಾಕ್ಷಾಯಿಣಮ್ಮ ಕಾವ್ಯ, ರಾಜೇಶ್ವರಿ, ಸಂಗಮ್ಮ, ಗೀತಾ ಚಂದ್ರಶೇಖರ್‌, ಸುವರ್ಣಮ್ಮ, ಪಾರ್ವತಿ, ಸುನೀತ ಉಪಸ್ಥಿತರಿದ್ದರು.

error: Content is protected !!