ವೀರೇಶ್ವರ ಪುಣ್ಯಾಶ್ರಮದಲ್ಲಿ ನಾಳೆ ಶಿವಾನುಭವ ಗೋಷ್ಠಿ

ದಾವಣಗೆರೆ, ಡಿ. 24- ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ನಾಡಿದ್ದು ದಿನಾಂಕ 26ರ ಮಂಗಳವಾರ ಬೆಳಿಗ್ಗೆ 11.30ಕ್ಕೆ ಗಂಟೆಗೆ 274ನೇ ಹೊಸ್ತಿಲು ಹುಣ್ಣಿಮೆ, ಶಿವಾನುಭವ ಗೋಷ್ಠಿ ಮತ್ತು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಸಾನ್ನಿಧ್ಯವನ್ನು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕಲ್ಲಯ್ಯಜ್ಜ (ಶ್ರೀ ವೀರೇಶ್ವರ ಪುಣ್ಯಾಶ್ರಮ) ವಹಿಸುವರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ, ಅಥಣಿ ಎಸ್. ವೀರಣ್ಣ ವಹಿಸುವರು. ಮುಖ್ಯ ಅತಿಥಿಗಳಾಗಿ ಅಣಬೇರು ರಾಜಣ್ಣ, ದೇವರಮನೆ ಶಿವಕುಮಾರ್,  ಜೆ.ಎನ್. ಕರಿಬಸಪ್ಪ, ಜಿ.ಹೆಚ್. ಯಲ್ಲಪ್ಪ, ಎ.ಎಸ್. ಸಿದ್ದಲಿಂಗಸ್ವಾಮಿ ಆಗಮಿಸುವರು. 

error: Content is protected !!