ನಗರದಲ್ಲಿ ಇಂದು ಶ್ರೀ ವೆಂಕಟೇಶ್ವರ ಸ್ವಾಮಿಯ ಅಖಂಡ ದರ್ಶನ, ಬ್ರಹ್ಮರಥೋತ್ಸವ

ನಗರದಲ್ಲಿ ಇಂದು ಶ್ರೀ ವೆಂಕಟೇಶ್ವರ ಸ್ವಾಮಿಯ ಅಖಂಡ ದರ್ಶನ, ಬ್ರಹ್ಮರಥೋತ್ಸವ

ಬೇತೂರು ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ವೈಕುಂಠ ಏಕಾದಶಿ ಶ್ರೀ ಸ್ವಾಮಿಯ ಅಖಂಡ ದರ್ಶನ ಕಾರ್ಯಕ್ರಮವು ಶ್ರೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ 5.30 ರಿಂದ 11 ರವರೆಗೆ ವೈಕುಂಠ ಏಕಾದಶಿ, ಶ್ರೀ ಸ್ವಾಮಿ ಅಖಂಡ ದರ್ಶನ ಮತ್ತು ಗರುಡೋತ್ಸವ ಜರುಗಲಿದ್ದು, ನಾಳೆ ಭಾನುವಾರ ಅಶ್ವ ಉತ್ಸವ ನಡೆಯಲಿದೆ.  ನಾಡಿದ್ದು ದಿನಾಂಕ 25 ರಂದು ಮಧ್ಯಾಹ್ನ 3:30 ರಿಂದ ನಡೆಯುವ ಬ್ರಹ್ಮ ರಥೋತ್ಸವ ಕಾರ್ಯಕ್ರಮದ ಉದ್ಘಾಟನೆ ಯನ್ನು ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ನೆರವೇರಿ ಸಲಿದ್ದು, ವಿವಿಧ ಕಲಾತಂಡ ಗಳಿಂದ ಭವ್ಯ ಮೆರವಣಿಗೆ ನಡೆಯಲಿದೆ. ಇದಕ್ಕೂ ಮುನ್ನ ಬೆಳಿಗ್ಗೆ ಶ್ರೀ ವೆಂಕಟೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮತ್ತು ಬೆಳಿಗ್ಗೆ 11 ಗಂಟೆಗೆ ಅನ್ನ ಸಂತರ್ಪಣಾ ಕಾರ್ಯಕ್ರಮ ಜರುಗಲಿದೆ. 

error: Content is protected !!