ಹರಿಹರದಲ್ಲಿ ಇಂದು ಕ.ಸು.ಸ.ಪ. ನೂತನ ಪದಾಧಿಕಾರಿಗಳ ಪದಗ್ರಹಣ

ಕರ್ನಾಟಕ ಸುಗಮ ಸಂಗೀತ ಪರಿಷತ್‍ನ ಹರಿಹರ ತಾಲ್ಲೂಕು ಘಟಕದ  ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಗಿರಿಯಮ್ಮ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿದುಷಿ ಶ್ರೀಮತಿ ಸಂಗೀತಾ ರಾಘವೇಂದ್ರ ತಿಳಿಸಿದ್ದಾರೆ. 

ಸಾಲಿಗ್ರಾಮ ಗಣೇಶ್‍ಶೆಣೈ ಅಧ್ಯಕ್ಷತೆ ವಹಿಸದ್ದು, ಉದ್ಘಾಟನೆಯನ್ನು ಶ್ರೀಮತಿ ಕೆ.ಎ.ಉಮಾ ನೆರವೇರಿಸಲಿದ್ದಾರೆ. ಜಿ.ಬಿ.ಗಂಗಾಧರ್, ಸುಭಾಷ್ ಬೊಂಗಾಳೆ, ಬಿ.ರೇವಣಸಿದ್ದಪ್ಪ, ಡಿ.ಕುಮಾರ್ ಮುಖ್ಯ ಅತಿಥಿಗಳಾಗಿದ್ದಾರೆ.

ಶಿವಕುಮಾರ ಬಿ.ಕರಡಿ, ಜಿ.ಪರಮೇಶ್ವರಪ್ಪ ಕತ್ತಿಗೆ, ನೂತನ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಶೇಷಗಿರಿ ವೇದಿಕೆಯಲ್ಲಿ ಗೌರವ ಉಪಸ್ಥಿತರಿರುವರು ಎಂದು ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯ ಕೆ.ಜೈಮುನಿ ತಿಳಿಸಿದ್ದಾರೆ.

error: Content is protected !!