ಭದ್ರಾ ಮೇಲ್ದಂಡೆ ಜಗಳೂರು ಶಾಖಾ ಕಾಲುವೆ ಪ್ರಗತಿಯಲ್ಲಿ

ಜಗಳೂರು, ಡಿ.15- ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಅವರು ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಲಿಖಿತ ಉತ್ತರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ಹಾಗೂ ಹಣಕಾಸಿನ ಮಾಹಿತಿಯನ್ನು ನೀಡಿದ್ದಾರೆ.  ಈ ಉತ್ತರದಲ್ಲಿ ಜಗಳೂರು ಶಾಖಾ ಕಾಲುವೆ ಅಡಿಯಲ್ಲಿ 13.200 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಕಲ್ಪಿಸುವ, ಕೆರೆಗ ಳನ್ನು ತುಂಬಿಸುವ ಯೋಜನೆಗೆ 1568. 91 ಕೋಟಿ ರೂಪಾಯಿ ಮೊತ್ತದ ಕಾಮ ಗಾರಿಗಳನ್ನು 2 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿ ಕೊಳ್ಳಲಾಗಿದ್ದು ಕಾಮಗಾರಿಗಳು ಪ್ರಗತಿ ಯಲ್ಲಿವೆ ಎಂದು ಉತ್ತರ ನೀಡಿದ್ದಾರೆ.

error: Content is protected !!