ಕೊಟ್ಟೂರಿನಲ್ಲಿ ಗವಾಯಿ ಅವರ ಸ್ವರ ಶ್ರದ್ಧಾಂಜಲಿ

ಕೊಟ್ಟೂರಿನಲ್ಲಿ ಗವಾಯಿ ಅವರ ಸ್ವರ ಶ್ರದ್ಧಾಂಜಲಿ

ಉಭಯ ಗಾನ ವಿಶಾರದರು, ತ್ರಿಭಾಷಾ ಕವಿವರ್ಯ, ಸಕಲ ವಾದ್ಯ ಕಂಠೀರವ ನಾಡೋಜ ಹಾಗೂ ಕಾಳಿದಾಸ ಪ್ರಶಸ್ತಿ ವಿಜೇತರು ಪರಮಪೂಜ್ಯ ಪಂಡಿತ್ ಪುಟ್ಟರಾಜ ಗವಾಯಿಗಳವರ ಹದಿನಾಲ್ಕನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಇಂದು ಸಂಜೆ 6 ಗಂಟೆಗೆ  ಕೊಟ್ಟೂರಿನ ಕಾಲೇಜಿಲ್ಲಿ ಆಯೋಜಿಸಲಾಗಿದೆ.  ಸಂಜೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಾದ ಸಿದ್ಧಾರ್ಥ್ ಬೆಳ್ಮಣ್ಣು ಇವರಿಂದ ಸಂಗೀತ ಕಾರ್ಯಕ್ರಮವಿರುತ್ತದೆ ಹಾಗೂ ಇವರೊಂದಿಗೆ ತಬಲಾ ಸಾಥಿಯಾಗಿ ಹೆಸರಾಂತ ತಬಲಾ ವಾದಕ ಶ್ರೀಧರ ಮಾಂಡ್ರೆ, ಹಾರ್ಮೋನಿಯಂ ವಾದಕ ಸತೀಶ್ ಭಟ್ ಹೆಗ್ಗಾರ್, ತಾಳವಾದ್ಯದೊಂದಿಗೆ ಸಂತೋಷ್ ಅಳವಂಡಿ (ದೀಕ್ಷಿತ್) ಜೊತೆಯಾಗಲಿದ್ದಾರೆ ಎಂದು ಪಂಡಿತ ಪುಟ್ಟರಾಜ ಗವಾಯಿಗಳವರ ಸೇವಾ ಸಮಿತಿಯ ಸುಧಾಕರ ಪಾಟೀಲ್ ತಿಳಿಸಿದ್ದಾರೆ.

error: Content is protected !!