ಲೇಬರ್ ಕಾಲೋನಿಯಲ್ಲಿ ಇಂದು ಅಯ್ಯಪ್ಪ ಸ್ವಾಮಿ ದೀಪೋತ್ಸವ

ಲೇಬರ್ ಕಾಲೋನಿಯಲ್ಲಿ ಇಂದು ಅಯ್ಯಪ್ಪ ಸ್ವಾಮಿ ದೀಪೋತ್ಸವ

ದಾವಣಗೆರೆ ಲೇಬರ್ ಕಾಲೋನಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿ ಅಯ್ಯಪ್ಪ ಶಬರಿಮಲೈ ಸೇವಾ ಸಮಿತಿ ವತಿಯಿಂದ ಇಂದು ಮತ್ತು ನಾಳೆ ಶ್ರೀ ಶಬರಿಮಲೈ ಅಯ್ಯಪ್ಪ ಸ್ವಾಮಿಯ ಮಹಾ ದೀಪೋತ್ಸವ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ 5 ರಿಂದ 6.30 ರವರೆಗೆ ಗಣಪತಿ ಹೋಮ, ಪೂರ್ಣಾಹುತಿ ನಡೆಯಲಿದೆ. ಬೆಳಗ್ಗೆ 7 ರಿಂದ 7.30 ರವರೆಗೆ ಸ್ವಾಮಿಯನ್ನು ಬಾಳೆ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಮಧ್ಯಾಹ್ನ 3 ಕ್ಕೆ ದೀಪೋತ್ಸವವಿದ್ದು, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಸ್. ವಿ. ರಾಮಚಂದ್ರ ದೀಪೋತ್ಸವವನ್ನು ಉದ್ಘಾಟಿಸುವರು. ನಂತರ ಸುಮಂಗಲಿಯರ ದೀಪೋತ್ಸವದೊಂದಿಗೆ ಸ್ವಾಮಿಯ ಮೆರವಣಿಗೆ ಜರುಗಲಿದೆ. ನಾಳೆ ಸೋಮವಾರ ಬೆಳಿಗ್ಗೆ 5 ರಿಂದ 6.30 ರವರೆಗೆ ಅಗ್ನಿಕುಂಡದ ಹರಕೆ ಅರ್ಪಿಸಲಾಗುವುದು. ನಂತರ 6.30ಕ್ಕೆ ಮಂಗಳಾರತಿ,  ಬಾಳೆಮಂಟಪ ವಿಸರ್ಜನೆ ನೆರವೇರಲಿದೆ.

error: Content is protected !!