ದಾವಣಗೆರೆ ಲೇಬರ್ ಕಾಲೋನಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿ ಅಯ್ಯಪ್ಪ ಶಬರಿಮಲೈ ಸೇವಾ ಸಮಿತಿ ವತಿಯಿಂದ ಇಂದು ಮತ್ತು ನಾಳೆ ಶ್ರೀ ಶಬರಿಮಲೈ ಅಯ್ಯಪ್ಪ ಸ್ವಾಮಿಯ ಮಹಾ ದೀಪೋತ್ಸವ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ 5 ರಿಂದ 6.30 ರವರೆಗೆ ಗಣಪತಿ ಹೋಮ, ಪೂರ್ಣಾಹುತಿ ನಡೆಯಲಿದೆ. ಬೆಳಗ್ಗೆ 7 ರಿಂದ 7.30 ರವರೆಗೆ ಸ್ವಾಮಿಯನ್ನು ಬಾಳೆ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಮಧ್ಯಾಹ್ನ 3 ಕ್ಕೆ ದೀಪೋತ್ಸವವಿದ್ದು, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಸ್. ವಿ. ರಾಮಚಂದ್ರ ದೀಪೋತ್ಸವವನ್ನು ಉದ್ಘಾಟಿಸುವರು. ನಂತರ ಸುಮಂಗಲಿಯರ ದೀಪೋತ್ಸವದೊಂದಿಗೆ ಸ್ವಾಮಿಯ ಮೆರವಣಿಗೆ ಜರುಗಲಿದೆ. ನಾಳೆ ಸೋಮವಾರ ಬೆಳಿಗ್ಗೆ 5 ರಿಂದ 6.30 ರವರೆಗೆ ಅಗ್ನಿಕುಂಡದ ಹರಕೆ ಅರ್ಪಿಸಲಾಗುವುದು. ನಂತರ 6.30ಕ್ಕೆ ಮಂಗಳಾರತಿ, ಬಾಳೆಮಂಟಪ ವಿಸರ್ಜನೆ ನೆರವೇರಲಿದೆ.
ಲೇಬರ್ ಕಾಲೋನಿಯಲ್ಲಿ ಇಂದು ಅಯ್ಯಪ್ಪ ಸ್ವಾಮಿ ದೀಪೋತ್ಸವ
![01 ayyappa swamy 10.12.2023 ಲೇಬರ್ ಕಾಲೋನಿಯಲ್ಲಿ ಇಂದು ಅಯ್ಯಪ್ಪ ಸ್ವಾಮಿ ದೀಪೋತ್ಸವ](https://janathavani.com/wp-content/uploads/2023/12/01-ayyappa-swamy-10.12.2023.jpg)