ದಾವಣಗೆರೆ, ಡಿ.10- ನಗರದ ಮಹತೀ ಸಾಂಸ್ಕೃತಿಕ ಕಲಾ ಸಂಸ್ಥೆಯಲ್ಲಿ ಮಹತೀ ಸಂಗೀತ ಮಹಾವಿದ್ಯಾಲಯದ ವತಿಯಿಂದ ಇದೇ ದಿನಾಂಕ 17 ರಿಂದ ಮಧ್ಯಾಹ್ನ 3 ಕ್ಕೆ ಶ್ರೀ ಪುರಂದರದಾಸರ ದೇವರ ನಾಮಗಳು ಹಾಗೂ ಸದ್ಗುರು ಶ್ರೀ ತ್ಯಾಗರಾಜರ ಪಂಚರತ್ನ ಕೃತಿ, ಹಾಡುಗಾರಿಕಾ ಸಂಗೀತ ಶಿಬಿರವನ್ನು ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಇದೇ ದಿನಾಂಕ 14ರೊಳಗೆ ಎಂ. ದ್ವಾರಕೇಶ್ (9448872944) ಹಾಗೂ ಸವಿತಾ ಕೂಲಂಬಿ (9986044145) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು.