ನಗರದಲ್ಲಿ ನಾಳಿನ ನಿವೇಶನ, ವಸತಿ ರಹಿತರ ಕಾರ್ಯಾಗಾರಕ್ಕೆ ಸಾತಿ ಸುಂದರೇಶ್ ಚಾಲನೆ

ದಾವಣಗೆರೆ, ಡಿ. 8- ನಿವೇಶನ ಮತ್ತು ವಸತಿ ರಹಿತರ ಕಾರ್ಯಾ ಗಾರಕ್ಕೆ ಸಿಪಿಐ ರಾಜ್ಯ ಕಾರ್ಯದರ್ಶಿ ಕಾಂ. ಸಾತಿ ಸುಂದರೇಶ್ ನಾಡಿದ್ದು ದಿನಾಂಕ  10ರ ಭಾನುವಾರ ಚಾಲನೆ ನೀಡಲಿದ್ದಾರೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ. 10ರಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ನಡೆಯುವ ಜಿಲ್ಲಾ ನಿವೇಶನ ಮತ್ತು ವಸತಿ ರಹಿತರ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಸರ್ಕಾರದ ವಿವಿಧ ಯೋಜನೆಗಳ ಮೂಲಕ ನಿವೇಶನ ರಹಿತ ಮತ್ತು ವಸತಿ ರಹಿತ ಫಲಾನುಭವಿಗಳು ಸೌಲತ್ತುಗಳನ್ನು ಪಡೆದುಕೊಳ್ಳುವ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ. ಬೆಳಿಗ್ಗೆ 11- 30ಕ್ಕೆ ಕಾಂ. ಪಂಪಾಪತಿ ಭವನದಲ್ಲಿ ಆರಂಭವಾಗುವ ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಿಪಿಐ ಹಿರಿಯ ಮುಖಂಡ ಹಾಗೂ ಜಿಲ್ಲಾ ಖಜಾಂಚಿ ಕಾಂ. ಆನಂದರಾಜ್ ವಹಿಸುವರು. 

error: Content is protected !!