ದಾವಣಗೆರೆ, ಡಿ. 8- ನಗರದಲ್ಲಿರುವ ರಾಜ್ಯ ಮಹಿಳಾ ನಿಲಯ ಜಿಲ್ಲಾ ಸಂಸ್ಥೆಯ 27 ವರ್ಷ ವಯಸ್ಸಿನ ನಿವಾಸಿಗೆ ವಾಕ್ ಹಾಗೂ ಶ್ರವಣ ದೋಷವಿದ್ದು, ಇವರ ವಿಳಾಸ ಪತ್ತೆಗೆ ಸಹಕರಿಸುವಂತೆ ರಾಜ್ಯ ಮಹಿಳಾ ನಿಲಯದ ಜಿಲ್ಲಾ ಸಂಸ್ಥೆಯ ಅಧೀಕ್ಷಕರು ಮನವಿ ಮಾಡಿದ್ದಾರೆ.
ಮುಖದ ಮೇಲೆ ಕಪ್ಪು ಮಚ್ಚೆ ಇದೆ. ಎಡಗೈ ಹೆಬ್ಬೆರಳು ತುಂಡಾಗಿದ್ದು, ದೈಹಿಕ ಮತ್ತು ಮಾನಸಿಕ ಸ್ಥಿತಿ ಸಾಮಾನ್ಯವಾಗಿದೆ. ಮಾತನಾಡಲು ಬರುವುದಿಲ್ಲ.
ಮಹಿಳೆ ಕಾಣೆ : ರಾಜ್ಯ ಮಹಿಳಾ ನಿಲಯ ಜಿಲ್ಲಾ ಸಂಸ್ಥೆಯ 55 ವರ್ಷ ವಯಸ್ಸಿನ ನಿವಾಸಿ ಹಿಂದೂ ಮರಾಠ ಜನಾಂಗದ ಸುಶೀಲ ನಾರಾಯಣ ಕಾಂಬ್ಳೆ ಅವರು ಮಾನಸಿಕ ಅಸ್ವಸ್ಥತೆಯಿಂದ ಮನೆ ಬಿಟ್ಟು ಬಂದಿದ್ದಾರೆ. ಎಡಕೆನ್ನೆ ಮೇಲೆ ಕಪ್ಪು ಮಚ್ಚೆ ಇದೆ. ಮರಾಠಿ ಮಾತನಾಡುತ್ತಾರೆ. ಇವರ ಸುಳಿವು ದೊರೆತಲ್ಲಿ ಜಿಲ್ಲಾ ಅಧೀಕ್ಷಕರ ಕಚೇರಿ, ರಾಜ್ಯ ಮಹಿಳಾ ನಿಲಯ, ಇಂಡಸ್ಟ್ರೀಯಲ್ ಏರಿಯಾ, ಶ್ರೀರಾಮನಗರ, ದೂ.ಸಂ. 9448940337 ಸಂಪರ್ಕಿಸಬಹುದು.