ಅಪರಿಚಿತನ ವಾರಸುದಾರರ ಪತ್ತೆಗೆ ಕರೆ

ದಾವಣಗೆರೆ, ಡಿ. 8- ಸುಮಾರು 25 ವರ್ಷದ ಯುವಕನೊಬ್ಬ ತನ್ನ ಹೆಸರು ಮುರುಳಿ ತಂದೆ ಶೇಖರಪ್ಪ ಹದಡಿ ಗ್ರಾಮ ಎಂದು ಹೇಳಿಕೊಂಡು ಹೊಟ್ಟೆ ನೋವು, ಉಸಿರಾಟದ ತೊಂದರೆ ಇರುವುದಾಗಿ ಹೇಳಿ ಕಳೆದ 15 ದಿನಗಳ ಹಿಂದೆ ಸಿ.ಜಿ. ಆಸ್ಪತ್ರೆಗೆ ದಾಖಲಾಗಿದ್ದು  ಕಳೆದ ವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸಂಬಂಧಪಟ್ಟವರು ಹದಡಿ ಪೊಲೀಸ್ ಠಾಣೆ   (94808 03254, ಫೋ. 08192-218405) ಯನ್ನು ಸಂಪರ್ಕಿಸಬಹುದು.

error: Content is protected !!