ಇಂದು ಆಮ್ ಆದ್ಮಿ ವರ್ಷಾಚರಣೆ

ದಾವಣಗೆರೆ, ನ.25-  ಆಮ್ ಆದ್ಮಿ  ಪಕ್ಷದ ಸಂಸ್ಥಾಪನಾ ದಿನದ 11ನೇ ವರ್ಷಾಚರಣೆ, ಸಂವಿಧಾನ ಅಂಗೀಕಾರ ದಿನಾಚರಣೆ ಹಾಗೂ ದಾವಣಗೆರೆ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಾಳೆ ದಿನಾಂಕ 26ರ ಭಾನುವಾರ ಬೆಳಿಗ್ಗೆ 11ಗಂಟೆಗೆ ಬನಶಂಕರಿ ಬಡಾವಣೆಯ ಶಿವ ರೆಸಿಡೆನ್ಸಿಯಲ್ಲಿ ಏರ್ಪಡಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಘಟಕದ ಅರಣ್‌ಕುಮಾರ್ ಸಿ.ಆರ್., ರವೀಂದ್ರ ಕೆ., ಆದಿಲ್ ಖಾನ್, ಸುರೇಶ್, ಧರ್ಮಾ ನಾಯ್ಕ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!