ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾಗಿ ರಮೇಶ್ ಪಟೇಲ್

ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾಗಿ ರಮೇಶ್ ಪಟೇಲ್

ದಾವಣಗೆರೆ, ಡಿ. 3 – ನಗರದ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾ ತ್ಮಕ ಅಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾಗಿ ಡಾ|| ರಮೇಶ್ ಪಟೇಲ್‍ ಶ್ರೀ ಶಂಕರ ಮಠದ ಆವರಣದಲ್ಲಿ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.

2023-25ನೇ  ಸಾಲಿನ ಪದಾಧಿಕಾರಿಗಳು : ಗೌರವ ಅಧ್ಯಕ್ಷೆ ಡಾ. ಸುಶೀಲಮ್ಮ, ಕೆ.ಹೆಚ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ, ಖಜಾಂಚಿ ಪುರುಷೋತ್ತಮ ಡಿ. ಪಟೇಲ್, ಉಪಾಧ್ಯಕ್ಷ ಭಾವನ್ನಾರಾಯಣ, ಸಂಚಾಲಕ  ಆರ್.ಎಂ. ಸತೀಶ್, ಸಂಘಟನಾ ಕಾರ್ಯದರ್ಶಿಯಾಗಿ ವಿ. ಕೃಷ್ಣಮೂರ್ತಿ, ಸಮಿತಿ ಸದಸ್ಯ  ವಿಜಯ ಕುಮಾರ್ ಶೆಟ್ಟಿ, ವಿಕ್ರಂ ಜೈನ್, ಶ್ರೀಮತಿ ಸಂಧ್ಯಾ ಶ್ರೀನಿವಾಸ್, ಶೈಲಾ ವಿಜಯ ಕುಮಾರ್ ಶೆಟ್ಟಿ, ಸುಮಾ ಏಕಾಂತಪ್ಪ, ವಿಠಲ್ ಮಹೇಂದ್ರಕರ್,  ಶಿವಕುಮಾರ ಸ್ವಾಮಿ, ಬಿ. ಸತ್ಯನಾರಾಯಣಮೂರ್ತಿ,
ಎಂ. ಶ್ರೀನಿವಾಸ್  ಮುಂತಾದವರು ಆಯ್ಕೆಯಾದರು.

error: Content is protected !!